ತಮಗೆ ತಿಳಿಸದೇ ನಾಳೆಯ ಯೋಗ ದಿನಾಚರಣೆಯ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕಿಸಿದ್ದಕ್ಕೆ ಬಾಗಲಕೋಟೆ ಡಿಸಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮಗೆ ಪ್ರೊಟೋಕಾಲ್ ಎಂದರೇನು ಗೊತ್ತಿಲ್ವಾ.. ಫೀಡ್ ಬ್ಯಾಕ್ ಕೊಡಿ. ಯಾವಾನೋ ಸಚಿವ ಬರ್ತಾನೆ ಅಂತಾ ನನ್ನ ಹೆಸರು ಹೇಗೆ ಹಾಕಿದ್ರಿ.. ಹೇಳದೇ ಕೇಳದೇ ಹೆಸರು ಹಾಕಿದ್ರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕರೆ ಕಟ್ ಮಾಡಿದ ಬಳಿಕ ತಮ್ಮ ಆಪ್ತರೊಂದಿಗೂ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ಆಡಿಯೋ ವೈರಲ್ ಆಗಿದೆ..
#publictv #hrranganath #newscafe